ಮತದಾನಕ್ಕೆ ಬಹಿಷ್ಕಾರ ಮಾಡಿದವರ ಮನ ಬದಲಿಸಿದ ತರಳಬಾಳು ಶ್ರೀಯಾರೇ ಬರಲಿ, ನಮಗೆ ಅಧಿಕೃತ ಆದೇಶ ತಂದುಕೊಟ್ಟಲ್ಲಿ ಮಾತ್ರ ನಮ್ಮ ಮತದಾನ ಬಹಿಷ್ಕಾರ ಹಿಂಪಡೆಯುವ ಯೋಚನೆ ಮಾಡುತ್ತೇವೆಂಬ ಆಕ್ರೋಶ ಸಾರಿದ್ದ ಸಿರಿಗೆರೆ ಸಮೀಪದ ಸಿದ್ದಾಪುರ ಗ್ರಾಮದ ಸುಮಾರು ೫೦೦ಕ್ಕೂ ಹೆಚ್ಚು ಮತದಾರರ ಮನ ಒಲಿಸಿ ಅವರನ್ನು ಸಮೀಪದ ಮತಗಟ್ಟೆಗೆ ಕರೆದೊಯ್ದು ಮತದಾನ ಪ್ರಕ್ರಿಯೆಯಲ್ಲಿ ಪಾಲುಗೊಳ್ಳುವಂತೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಮಾಡಿದ ಪ್ರಸಂಗ ಇಂದು ನಡೆಯಿತು.