ಜಯಪ್ರಕಾಶ್ ಪುತ್ತೂರು ಬರೆದಿರುವ ದಶಕಗಳ ಸಾಹಿತ್ಯದ ಮೊಗಸಾಲೆಯಲ್ಲಿ ಹಾಗೂ ಶಿಕ್ಷಣ ತಜ್ಞರ ವಿಚಾರ-ಚಿಂತನೆಗಳನ್ನು ದಾಖಲೀಕರಣ ಮಾಡಿರುವ ವಸಂತ್ ಭಟ್ ಅವರ ಸಂಪಾದನೆಯಲ್ಲಿ ಮೂಡಿಬಂದಿರುವ ತೇಜೋನಿಧಿ ಪುಸ್ತಕಗಳ ಕುರಿತು ಈ ಅಂಕಣದಲ್ಲಿ ವಿಶ್ಲೇಷಣೆ ಮಾಡಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ, ತರಳಬಾಳು ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಿ. ನಾಗೇಂದ್ರಪ್ಪ ಅವರು ಸರ್ವಜ್ಞ ಸಾಹಿತಿ ಉತ್ತಂಗಿ ಚನ್ನಪ್ಪನವರ ಸಮಗ್ರ ಸಾಹಿತ್ಯವನ್ನು ಐದು ಸಂಪುಟಗಳಲ್ಲಿ ಸಂಪಾದಿಸಿದ್ದಾರೆ. ಎಸ್.ಆರ್. ಗುಂಜಾಳ ಅವರು ಗೌರವ ಸಂಪಾದಕರು.
ಯುವ ಕವಿ ಎಸ್. ಶಿಶಿರಂಜನ್ ಅವರ ನವಭಾರತ ಜನನಿಯ ತನುಜಾತೆ- ಮತ್ತೊಂದು ಕವನ ಸಂಕಲನ ಪ್ರಕಟವಾಗಿದೆ.