ಬಡರೋಗಿಗಳಿಗೆ ಆಸ್ಪತ್ರೆ; ಡಾ.ಸಲೀಂ ಸೇವೆ ಶ್ಲಾಘನೀಯ: ಸಿಎಂ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ಹೃದ್ರೋಗ ಹಾಗೂ ಇತರೆ ಎಲ್ಲಾ ರೋಗಗಳಿಗೆ ಚಿಕಿತ್ಸೆ ನೀಡಲು, ಗಡಿ ಭಾಗದ ರೋಗಿಗಳಿಗೆ ಸದಾ ಸೇವೆ ಕಲ್ಪಿಸಲು, ಪಟ್ಟಣದಲ್ಲಿ ಸುಸಜ್ಜಿತ ಆಸ್ಪತ್ರೆ ತೆರೆದಿದ್ದು ಸಂತಸ ತಂದಿದೆ. ನಾನಾ ರೋಗಗಳ ನಿಮಿತ್ತ ಆಸ್ಪತ್ರೆಗೆ ಬಂದ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ಕಲ್ಪಿಸಬೇಕು, ಆಸ್ಪತ್ರೆಯ ಬಗ್ಗೆ ಜನತೆಗೆ ವಿಶ್ವಾಸ ಬರುವ ರೀತಿಯಲ್ಲಿ ವೈದ್ಯರ ಸೇವೆ ಅಗತ್ಯವಾಗಿದೆ.