ಇಗ್ಗಲೂರು ಜಲಾಶಯದಲ್ಲಿ ನೀರಿನ ಮಟ್ಟ ಕುಸಿತ!ಚನ್ನಪಟ್ಟಣ: ತಾಲೂಕಿನ ಜೀವಸೆಲೆಯಾದ ಇಗ್ಗಲೂರು ಜಲಾಶಯ (ಎಚ್.ಡಿ.ದೇವೇಗೌಡ ಬ್ಯಾರೇಜ್) ಬಹುತೇಕ ಬರಿದಾಗಿದ್ದು, ನೀರಿನ ಮಟ್ಟ ಡೆಡ್ಸ್ಟೋರೇಜ್ಗಿಂತ ಕಡಿಮೆಯಾಗಿದೆ. ಇದರಿಂದಾಗಿ ತಾಲೂಕಿನ ಬಹುತೇಕ ಕೆರೆ-ಕಟ್ಟೆಗಳು ನೀರಿಲ್ಲದೇ ಬತ್ತಿಹೋಗಿ, ನೀರಾವರಿ ಕ್ರಾಂತಿಗೆ ಹೆಸರಾಗಿದ್ದ ಬೊಂಬೆನಾಡಿನಲ್ಲಿ ಜಲಕ್ಷಾಮದ ಆತಂಕ ಎದುರಾಗಿದೆ.