ಮನಸ್ಸಿನ ಮಾಲಿನ್ಯ ನಿವಾರಣೆಗೆ ವಚನ ಸಾಹಿತ್ಯವೇ ಮಾರ್ಗಸೂಚಿ: ಡಾ.ಮಲ್ಲಿಕಾರ್ಜುನ ಸ್ವಾಮೀಜಿಕಳ್ಳರು ಕದಿಯಲಾಗದ, ಅಣ್ಣ-ತಮ್ಮಂದಿರು ಪಾಲು ಕೇಳಲಾಗದ, ಬಳಸಿದಷ್ಟು ವ್ಯಯವಾಗದ ಒಳ್ಳೆಯ ವಿದ್ಯೆ, ಜ್ಞಾನ ಸಂಪತ್ತು ಬಸವಾದಿ ಶಿವಶರಣರ ವಚನ ಸಾಹಿತ್ಯವೇ ಆಗಿದ್ದು, ಮನಸ್ಸಿನ ಮೈಲಿಗೆ ತೊಳೆದು ನಮ್ಮ ಬಾಳಿಗೆ ಬೆಳಕು ನೀಡುವ ಸಾಧನವಾಗಿದೆ. ಆಂತಹ ವಚನ ಸಾಹಿತ್ಯವನ್ನು ಪ್ರತಿಯೊಬ್ಬ ಶಿವಶರಣ ನಿತ್ಯವು ಬಾಳಿನಲ್ಲಿ ಅಳವಡಿಸಿಕೊಂಡು ಬದುಕಬೇಕಿದೆ.