ಇಂದು ಮೇಯರ್ ನೇತೃತ್ವದ ‘ಜನಸ್ಪಂದನ’ ಕಾರ್ಯಕ್ರಮಕ್ಕೆ ಚಾಲನೆಮಂಗಳೂರು ಮಹಾನಗರ ಪಾಲಿಕೆ ಜನತೆಯ ಎಲ್ಲ ರೀತಿಯ ಕುಂದುಕೊರತೆಗಳಿಗೆ ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ಕೈಗೊಳ್ಳಲು ಮೇಯರ್ ನೇತೃತ್ವದಲ್ಲಿ ‘ಜನಸ್ಪಂದನ’ ಕಾರ್ಯಕ್ರಮಕ್ಕೆ ಡಿ.18ರಂದು ಚಾಲನೆ ಸಿಗಲಿದೆ. ಇಂದು ದಿನ ಪೂರ್ತಿ ಅರ್ಜಿಗಳ ಸ್ವೀಕಾರ ಹಾಗೂ ವಿಲೇವಾರಿ ನಡೆಯಲಿದ್ದು, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಉಪಸ್ಥಿತರಿರುವರು.