ಮೊದಲ ಪ್ರಾಶಸ್ತ್ಯ ಮತ ನೀಡಿ ಗೆಲ್ಲಿಸಿ: ಮರಿತಿಬ್ಬೇಗೌಡಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಯ ಶಿಕ್ಷಕರ ಮತದಾರರು ನಾಲ್ಕು ಬಾರಿಯಿಂದಲೂ ನನ್ನನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಆಯ್ಕೆ ಮಾಡಿದ್ದೀರಾ, ಎರಡನೇ ಬಾರಿಗೆ ಪಕ್ಷೇತರರಾಗಿ ನಿಂತರೂ ಆಯ್ಕೆ ಮಾಡಿದ್ದೀರಾ. ಮತ್ತೆರಡು ಬಾರಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದಾಗಲೂ ಕೈ ಹಿಡಿದು ಬೆಂಬಲಿಸಿದ್ದೀರಾ, ಈಗ ತವರು ಪಕ್ಷಕ್ಕೆ ಮರಳಿ ಮತ್ತೆ ಸ್ಪರ್ಧೆ ಮಾಡಿದ್ದೇನೆ.