ಭಾರತ ಸಂವಿಧಾನ ರಚಿಸಿದ ಮಹಾನ್ ಜ್ಞಾನಿ ಡಾ.ಅಂಬೇಡ್ಕರ್: ತಹಸೀಲ್ದಾರ್ಹಿಂದಿನ ಸಂಪ್ರದಾಯ, ಸಮಾಜದಲ್ಲಿದ್ದ ಅಸಮಾನತೆ, ಶೋಷಣೆಯಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ವಿದ್ಯಾಭ್ಯಾಸವನ್ನು ಮಾಡಿ, ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಸಮಾನವಾಗಿ ಜೀವಿಸುವ ಹಕ್ಕಿದೆ ಎಂದು ಸಾರಿದ, ದೇಶದ ಪ್ರಗತಿಗೆ ಪೂರಕ ಸಂವಿಧಾನ ರಚಿಸಿದ ಮಹಾನ್ ಜ್ಞಾನಿ ಡಾ. ಬಿ.ಆರ್. ಅಂಬೇಡ್ಕರ್ ಎಂದು ತಹಸೀಲ್ದಾರ್ ಎರ್ರಿಸ್ವಾಮಿ ಚನ್ನಗಿರಿಯಲ್ಲಿ ಹೇಳಿದ್ದಾರೆ.