ದ.ಕ.ಜಿಲ್ಲೆಯಲ್ಲಿ ಇನ್ನೂ ಮೂಡದ ಪರಿಸರ ಪ್ರಜ್ಞೆ: ಕೈಜೋಡಿಸುವಂತೆ ಕೋರ್ಟ್ಗೆ ಎನ್ಜಿಒ ಮೊರೆ!ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ, ನರೇಗದ ಮಾಜಿ ಒಂಬುಡ್ಸ್ಮೆನ್ ಎನ್.ಶೀನ ಶೆಟ್ಟಿ ಮತ್ತು ಕೃಷ್ಣ ಮೂಲ್ಯ ಅವರು ದ.ಕ.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಿಗೆ ಸ್ವಚ್ಛತೆ ಅರಿವು ಕುರಿತು ನೆರವಾಗಲು ಲಿಖಿತ ಮನವಿ ಸಲ್ಲಿಸಿದ್ದಾರೆ. ಈ ಮನವಿಯಲ್ಲಿ ಜನತೆಗೆ ಅಗತ್ಯ ಕಾನೂನು ಪಾಠ, ಕಾನೂನು ಅರಿವು, ಮಾರ್ಗದರ್ಶನ ನೀಡಿ ತ್ಯಾಜ್ಯಮುಕ್ತ ಸುಸ್ಥಿರ ಸ್ವಚ್ಛ ಜಿಲ್ಲೆಗೆ ಸಹಕಾರ ನೀಡುವಂತೆ ಕೋರಿದ್ದಾರೆ.