ನಿಮ್ಮೆಲ್ಲರ ಸೇವೆಗೆ ಅವಕಾಶ ಮಾಡಿಕೊಡಿ: ಬಾಲರಾಜುಲೋಕಸಭಾ ಚುನಾವಣೆಯು ಅಭಿವೃದ್ಧಿ ಹಾಗೂ ಸರ್ವರ ಏಳ್ಗೆಗಾಗಿ ನಡೆಯುತ್ತಿರುವ ಚುನಾವಣೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾದರೆ, ದೇಶದ ಅಭಿವೃದ್ದಿಯ ಚಿತ್ರಣವೇ ಬದಲಾಗುತ್ತದೆ. ಬಿಜೆಪಿಗೆ ಮತ ಹಾಕುವ ಮೂಲಕ ನಿಮ್ಮೆಲ್ಲರ ಸೇವೆ ಮಾಡಲು ನನಗೊಂದು ಅವಕಾಶ ನೀಡಿ ಎಂದು ಚಾ.ನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ಮನವಿ ಮಾಡಿದರು.