ಸಾರಾಂಶ
ವಿಜಯಪುರ: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದಿಂದ ನಾನು ಸ್ಪರ್ಧೆ ಮಾಡಿದ್ದೇನೆ. ಈ ಜಿಲ್ಲೆಯ ಜನರ ನಾಡಿ ಮಿಡಿತ ಬಲ್ಲವನಾಗಿದ್ದು, ಜನತೆಗೆ ಸ್ಪಂದಿಸುತ್ತೇನೆ. ಅದಕ್ಕಾಗಿ ವಿಜಯಪುರ ಮೀಸಲು ಕ್ಷೇತ್ರದ ಜನರು ನನಗೊಂದು ಅವಕಾಶ ನೀಡುವಂತೆ ಅಭ್ಯರ್ಥಿ ಜಿತೇಂದ್ರ ಕಾಂಬಳೆ ಮನವಿ ಮಾಡಿದ್ದಾರೆ.
ವಿಜಯಪುರ: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದಿಂದ ನಾನು ಸ್ಪರ್ಧೆ ಮಾಡಿದ್ದೇನೆ. ಈ ಜಿಲ್ಲೆಯ ಜನರ ನಾಡಿ ಮಿಡಿತ ಬಲ್ಲವನಾಗಿದ್ದು, ಜನತೆಗೆ ಸ್ಪಂದಿಸುತ್ತೇನೆ. ಅದಕ್ಕಾಗಿ ವಿಜಯಪುರ ಮೀಸಲು ಕ್ಷೇತ್ರದ ಜನರು ನನಗೊಂದು ಅವಕಾಶ ನೀಡುವಂತೆ ಅಭ್ಯರ್ಥಿ ಜಿತೇಂದ್ರ ಕಾಂಬಳೆ ಮನವಿ ಮಾಡಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿ ಅವರು ಮಾತನಾಡಿದರು. ಇಂದು ಭಾರತದ ರಾಜಕೀಯ ಚಿಂತಾಜನಕವಾಗಿದೆ ಎಂದು ದೂರಿದರು. ಈ ಸಂದರ್ಭದಲ್ಲಿ ಬಾಗಲಕೋಟ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶಂಕರ ನಾಯ್ಕರ, ಜಿಲ್ಲಾಧ್ಯಕ್ಷ ವಿಶ್ವನಾಥ ಕುಲಕರ್ಣಿ, ಚಂದ್ರು ಮೇಲಿನಮನಿ, ಶ್ರೀಧರ ಹಲ್ಯಾಳ, ಮಾರುತಿ ಬೂದಿಹಾಳ, ದಯಾನಂದ ಹೆಬ್ಬಾಳ, ಕಲ್ಮೇಶ ಶಹಾಪೇಟೆ, ಶ್ರೀಧರ ಇಮ್ಮನ್ನವರ, ಸೋಮು ರಣದೇವಿ, ಕುಮಾರ ವಾಘಮೊರೆ, ಚಂದ್ರಶೇಖರ ಉಪ್ಪಾರ, ಪರಶುರಾಮ ಚಲವಾದಿ, ಸದಾಶಿವ, ಶಾಂತಪ್ಪ ಕಪಾಲಿ, ಸುನೀಲದತ್ತ ಸರಾಫ ಇದ್ದರು.