ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಬೆಳವಡಿ ಗ್ರಾಪಂ ಪಂಚಾಯತಿ ವ್ಯಾಪ್ತಿಯ ಕೆ.ಬಿ.ಪಟ್ಟಿಹಾಳ ಕ್ರಾಸ್ ಹತ್ತಿರದ ಮುಲ್ಲಾ ಮಡ್ಡಿ ಸ್ಥಳದಲ್ಲಿ ವಾಸಿಸುತ್ತಿರುವ ಅಲೆಮಾರಿ ಬುಡಕಟ್ಟು ಜನದವರಿಗೆ ಮೂಲಭೂತ ಸೌಲಭ್ಯಗಳನು ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಪದಾಧಿಕಾರಿಗಳು ಎಸಿ ಪ್ರಭಾವತಿ ಫಕೀರಪೂರ, ಬೆಳವಡಿ ಪಿಡಿಒ ಉಸ್ಮಾನ ನದಾಫ ಅವರಿಗೆ ಮನವಿ ಸಲ್ಲಿಸಿದರು.