ಕೃಷ್ಣವಾದಿರಾಜ ಮಠದಲ್ಲಿ ವಸಂತ ಧಾರ್ಮಿಕ ಶಿಬಿರ

| Published : May 10 2024, 01:30 AM IST

ಸಾರಾಂಶ

ವಿಜಯಪುರ: ನಗರದ ಶ್ರೀಕೃಷ್ಣ ವಾದಿರಾಜ ಮಠದಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಕರಕಮಲ ಸಂಜಾತರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ಆದೇಶದಂತೆ ಗುರುವಾರದಿಂದ ಮೇ.೧೫ ರ ವರೆಗೆ ವಸಂತ ಧಾರ್ಮಿಕ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ೫ ವರ್ಷದ ಬಾಲಕ -ಬಾಲಕಿರಿಂದ ೮೦ ವರ್ಷದ ಎಲ್ಲ ವಿಪ್ರ ಪುರುಷ-ಸ್ತ್ರೀಯರಿಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ವಿಷಯಗಳನ್ನು ಬೋಧಿಸಲಾಗುತ್ತಿದೆ.

ವಿಜಯಪುರ: ನಗರದ ಶ್ರೀಕೃಷ್ಣ ವಾದಿರಾಜ ಮಠದಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಕರಕಮಲ ಸಂಜಾತರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ಆದೇಶದಂತೆ ಗುರುವಾರದಿಂದ ಮೇ.೧೫ ರ ವರೆಗೆ ವಸಂತ ಧಾರ್ಮಿಕ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ೫ ವರ್ಷದ ಬಾಲಕ -ಬಾಲಕಿರಿಂದ ೮೦ ವರ್ಷದ ಎಲ್ಲ ವಿಪ್ರ ಪುರುಷ-ಸ್ತ್ರೀಯರಿಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ವಿಷಯಗಳನ್ನು ಬೋಧಿಸಲಾಗುತ್ತಿದೆ. ಮಕ್ಕಳಿಗೆ ಸಂಧ್ಯಾವಂದನೆ, ಹಿರಿಯರಿಗೆ ದೇವರ ಪೂಜೆ, ಸ್ತೋತ್ರಗಳು, ಸ್ತ್ರೀಯರಿಗೆ ಸ್ತ್ರೀಧರ್ಮ ಇತ್ಯಾದಿ ಪಾಠ ಹೇಳಿಕೊಡಲಾಗುತ್ತಿದೆ.

ಶಿಬಿರವು ಪ್ರತಿದಿನ ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆ ವರೆಗೆ ಹಾಗೂ ಸ್ತ್ರೀಯರಿಗೆ ಸಂಜೆ ೪.೪೦ರಿಂದ ೬.೩೦ಗಂಟೆ ವರೆಗೆ ಮಕ್ಕಳಿಗೆ ಮಧ್ಯಾಹ್ನ ಭೋಜನ ಹಾಗೂ ಸಂಜೆ ಪಾನೀಯ ವ್ಯವಸ್ಥೆ ಇರುತ್ತದೆ. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಗುವುದು. ಕಾರಣ ಎಲ್ಲ ವಿಪ್ರ ಬಂಧುಗಳು ಈ ಶಿಬಿರದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಶ್ರೀಮಠದ ಆಡಳಿತ ಮಂಡಳಿ ಸರ್ವ ಸದಸ್ಯರು ಕೋರಿರುವರು. ಹೆಚ್ಚಿನ ಮಾಹಿತಿಗಾಗಿ ೯೪೪೮೯೫೫೨೧೦ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.