ಕೋಟ ಆನಂದ್ ಸಿ. ಕುಂದರ್ ಜನ್ಮದಿನ: ಸೇವಾಶ್ರಮಗಳಿಗೆ, ಅಶಕ್ತರಿಗೆ ಧನಸಹಾಯ

| Published : May 08 2024, 01:08 AM IST

ಕೋಟ ಆನಂದ್ ಸಿ. ಕುಂದರ್ ಜನ್ಮದಿನ: ಸೇವಾಶ್ರಮಗಳಿಗೆ, ಅಶಕ್ತರಿಗೆ ಧನಸಹಾಯ
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮ ೭೬ನೇ ಜನ್ಮದಿನದ ಹಿನ್ನೆಲೆಯಲ್ಲಿ ಆನಂದ್‌ ಸಿ. ಕುಂದರ್‌, ಜನತಾ ಗ್ರೂಪ್ ಹಾಗೂ ಗೀತಾನಂದ ಫೌಂಡೇಶನ್ ಮೂಲಕ ಒಂದಿಷ್ಟು ಅನಾಥಾಶ್ರಮ, ವಿಕಲಚೇತನ, ಅಶಕ್ತರಿಗೆ ಸುಮಾರು ೬ ಲಕ್ಷ ರು.ಗೂ ಅಧಿಕ ಮೌಲ್ಯದ ಧನ ಸಹಾಯದ ಚೆಕ್ ವಿತರಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕೋಟ

ಅನಾಥಾಶ್ರಮಗಳ ನಿರ್ವಹಣೆಯೇ ಕ್ಲಿಷ್ಟಕರ, ಆದ್ದರಿಂದ ಅದರ ನಿರ್ವಹಣೆಗೆ ಅಗತ್ಯವಾದ ಆರ್ಥಿಕ ಕ್ರೋಡಿಕರಣ ಅಗತ್ಯ. ಈ ದಿಸೆಯಲ್ಲಿ ಗೀತಾನಂದ ಫೌಂಡೇಶನ್ ಮೂಲಕ ನೆರವು ಯೋಜನೆ ಸಹಕಾರಿಯಾಗಲಿ ಎಂದು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ನುಡಿದರು.

ತಮ್ಮ ೭೬ನೇ ಜನ್ಮದಿನದ ಹಿನ್ನೆಲೆಯಲ್ಲಿ ಜನತಾ ಗ್ರೂಪ್ ಹಾಗೂ ಗೀತಾನಂದ ಫೌಂಡೇಶನ್ ಮೂಲಕ ಒಂದಿಷ್ಟು ಅನಾಥಾಶ್ರಮ, ವಿಕಲಚೇತನ, ಅಶಕ್ತರಿಗೆ ಸುಮಾರು ೬ ಲಕ್ಷ ರು.ಗೂ ಅಧಿಕ ಮೌಲ್ಯದ ಧನ ಸಹಾಯದ ಚೆಕ್ ವಿತರಿಸಿ ಮಾತನಾಡಿದರು.

ಕಳೆದ ವರ್ಷ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ಒಂದಿಷ್ಟು ಆಶ್ರಮಗಳಿಗೆ ನೆರವು ನೀಡಲಾಗಿದ್ದು, ಅದೇ ರೀತಿ ಈ ವರ್ಷವು ಹಮ್ಮಿಕೊಳ್ಳಲಾಗಿದೆ. ಅನಾಥಾಶ್ರಮಗಳು ನೆರಳು ನೀಡುವ ಧಾಮಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಈ ಕಾರ್ಯ ನಿತ್ಯ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.

ಇದೇ ವೇಳೆ ಒಟ್ಟು ೧೩ ಅನಾಥಾಶ್ರಮ, ವಿಕಲಚೇತನ, ಅಶಕ್ತರಿಗೆ ಚೆಕ್ ಮೂಲಕ ಧನಸಹಾಯ ಹಸ್ತಾಂತರಿಸಿದರು.

ಈ ವೇಳೆ ಆಶ್ರಮಗಳ ಮುಖ್ಯಸ್ಥರು, ಜನತಾ ಸಂಸ್ಥೆಯ ಸಿಬ್ಬಂದಿ, ಗೀತಾನಂದ ಟ್ರಸ್ಟ್ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್, ಸಮಾಜಕಾರ್ಯ ವಿಭಾಗದ ರವಿಕಿರಣ್ ಕೋಟ ನಿರೂಪಿಸಿ ವಂದಿಸಿದರು.