ಬಸವೇಶ್ವರ ಜಯಂತಿ ಪ್ರಯುಕ್ತ ಬಸವ ಉತ್ಸವ ಮೆರಣಿಗೆ ಇಂದು

| Published : May 10 2024, 01:30 AM IST

ಬಸವೇಶ್ವರ ಜಯಂತಿ ಪ್ರಯುಕ್ತ ಬಸವ ಉತ್ಸವ ಮೆರಣಿಗೆ ಇಂದು
Share this Article
  • FB
  • TW
  • Linkdin
  • Email

ಸಾರಾಂಶ

ವಚನ ಜ್ಯೋತಿ ಬಳಗದಿಂದ ಜಗಜ್ಯೋತಿ ಬಸವೇಶ್ವರ ಜಯಂತಿ ಅಂಗವಾಗಿ ಶುಕ್ರವಾರ ಬೆಳಗ್ಗೆ 6ಕ್ಕೆ ಬಸವ ಉತ್ಸವ ಮೆರವಣಿಗೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಚನ ಜ್ಯೋತಿ ಬಳಗದಿಂದ ಜಗಜ್ಯೋತಿ ಬಸವೇಶ್ವರ ಜಯಂತಿ ಅಂಗವಾಗಿ ಶುಕ್ರವಾರ ಬೆಳಗ್ಗೆ 6ಕ್ಕೆ ಬಸವ ಉತ್ಸವ ಮೆರವಣಿಗೆ ನಡೆಯಲಿದೆ.

ಮೆರವಣಿಗೆಯು ಹೊಸಹಳ್ಳಿ ಮೆಟ್ರೋ ಸಮೀಪದ ಶ್ರೀ ಜಗಜ್ಯೋತಿ ಬಸವೇಶ್ವರ ವಿದ್ಯಾರ್ಥಿ ನಿಲಯದಿಂದ ಹೊರಟು ವಿಜಯನಗರ ಮುಖ್ಯರಸ್ತೆ, ಹೊಸಹಳ್ಳಿ ಗ್ರಾಮ, ವಿಜಯನಗರ ಕ್ಲಬ್‌ ರಸ್ತೆ, ಸೆಂಟ್‌ಜಾನ್‌ ಸ್ಕೂಲ್ ರಸ್ತೆ, ಬೈಟೂ ಕಾಫಿ ರಸ್ತೆ, ಹಂಪಿನಗರ ಮುಖ್ಯರಸ್ತೆ, ಹಂಪಿನಗರ ಬಸ್‌ನಿಲ್ದಾಣ, ಅತ್ತಿಗುಪ್ಪೆ ಮೆಟ್ರೋ, ಮಾರುತಿ ಮಂದಿರ, ವಿಜಯನಗರ ಬಸ್‌ ನಿಲ್ದಾಣದ ಮೂಲಕ ಸಂಚರಿಸಿ ಹೊಸಹಳ್ಳಿ ಮೆಟ್ರೋ ಬಳಿ ಸಮಾರೋಪಗೊಳ್ಳಲಿದೆ ಎಂದು ವಚನ ಜ್ಯೋತಿ ಬಳಗ ಅಧ್ಯಕ್ಷ ಎಸ್.ಪಿನಾಕಪಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.