ಜನಪರ ಪ್ರಗತಿ ಆಮ್ ಆದ್ಮಿಯಿಂದ ಮಾತ್ರ ಸಾಧ್ಯ
KannadaprabhaNewsNetwork | Published : Oct 03 2023, 06:07 PM IST
ಜನಪರ ಪ್ರಗತಿ ಆಮ್ ಆದ್ಮಿಯಿಂದ ಮಾತ್ರ ಸಾಧ್ಯ
ಸಾರಾಂಶ
ಜನಪರ ಪ್ರಗತಿ ಆಮ್ ಆದ್ಮಿಯಿಂದ ಮಾತ್ರ ಸಾಧ್ಯಎಎಪಿ ಜಿಲ್ಲಾ ಘಟಕದ ಸಂಘಟನ ಕಾರ್ಯದರ್ಶಿ ಎನ್.ರಾಮಾಂಜಿನಪ್ಪ ಕರೆ
ಎಎಪಿ ಜಿಲ್ಲಾ ಘಟಕದ ಸಂಘಟನ ಕಾರ್ಯದರ್ಶಿ ಎನ್.ರಾಮಾಂಜಿನಪ್ಪ ಕರೆ ಕನ್ನಡಪ್ರಭ ವಾರ್ತೆ ಪಾವಗಡ ಭ್ರಷ್ಟಾಚಾರ ತಡೆ, ಸಾಮಾಜಿಕ ನ್ಯಾಯ ಸೇರಿದಂತೆ ಜನಪರ ಪ್ರಗತಿ ಎಎಪಿಯಿಂದ ಮಾತ್ರ ಸಾಧ್ಯ. ಹೀಗಾಗಿ ತಾಲೂಕು ಹಾಗೂ ಜಿಲ್ಲೆಯಲ್ಲಿ ಪಕ್ಷವನ್ನು ಸದೃಢವಾಗಿ ಸಂಘಟಿಸಿ ಅಧಿಕಾರಕ್ಕೆ ತರುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಪಾವಗಡದ ಎನ್.ರಾಮಾಂಜಿನಪ್ಪ ಕಾರ್ಯಕರ್ತರಿಗೆ ಕರೆ ನೀಡಿದರು. ತಾಲೂಕು ಎಎಪಿಯಿಂದ ಸೋಮವಾರ ಪಟ್ಟಣದ ಹಳೇ ಬಸ್ ನಿಲ್ದಾಣದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪಕ್ಷ ಸಂಘಟನೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ತಾಲೂಕು ಘಟಕದ ಅಧ್ಯಕ್ಷರನ್ನಾಗಿ ಗೋಪಾಲ್ ಅವರನ್ನು ಆಯ್ಕೆಗೊಳಿಸಿ ಆದೇಶ ಹೊರಡಿಸಿದ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಜನಸಾಮಾನ್ಯರಿಗೆ ನ್ಯಾಯ, ಸೌಲಭ್ಯ ಹಾಗೂ ಅರ್ಥಿಕ ಸಾಮಾಜಿಕ ಬದುಕುಕಟ್ಟಿಕೊಡುವಲ್ಲಿ ಎಎಪಿ ಪ್ರಮುಖ ಪಾತ್ರವಹಿಸಿದೆ. ಪಕ್ಷದ ರೂವಾರಿ ಹಾಗೂ ದೆಹಲಿಯ ಸಿಎಂ ಕೆಜ್ರಿವಾಲ್ ಅವರ ಜನಪರ ಸೇವೆ, ಕಾಳಜಿ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆ ಹಿನ್ನಲೆ ರಾಜ್ಯದ ಜನತೆ ಅಮ್ ಆದ್ಮಿ ಪಕ್ಷದ ಬಗ್ಗೆ ಬಲವಾದ ವಿಶ್ವಾಸವಿಟ್ಟಿದ್ದಾರೆ. ಹೀಗಾಗಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕಿದ್ದು, ನಾವೆಲ್ಲಾ ಸಂಘಟಿತರಾಗಿ ಸದೃಢವಾಗಿ ಪಕ್ಷ ಕಟ್ಟಬೇಕು. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಎಎಪಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಸಲಹೆ ನೀಡಿದರು. ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಎಎಪಿ ತಾ. ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿದ್ದು, ಜಿಲ್ಲಾ ಸಮಿತಿ ತೀರ್ಮಾನಿಸಿ, ಪಕ್ಷದ ತಾಲೂಕು ಘಟಕದ ನೂತನ ಅಧ್ಯಕ್ಷರನ್ನಾಗಿ ಕಡಮಲಕುಂಟೆ ಗೋಪಾಲ್ರನ್ನು ಆಯ್ಕೆಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಇತರೆ ಪಕ್ಷದ ಸ್ಥಾನಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದರು. ಇದೇ ವೇಳೆ ಜಿಲ್ಲಾಧ್ಯಕ್ಷರಾದ ಜಯರಾಮಯ್ಯ ಪ್ರಧಾನ ಕಾರ್ಯದರ್ಶಿ ಮಧುಸೂಧನ್ ಇತರೆ ಪಕ್ಷದ ಜಿಲ್ಲಾ ಮುಖಂಡರು ಸಂಘಟನೆ ಕುರಿತು ಮಾತನಾಡಿದ್ದು, ಮಹಿಳಾ ಘಟಕದ ಅಧ್ಯಕ್ಷರಾದ ರುಕ್ಸಾನ ಬಾನು, ಸೋಷಿಯಲ್ ಮೀಡಿಯ ಪ್ರಕಾಶ್ ಮತ್ತು ರೈತ ಘಟಕದ ಅಧ್ಯಕ್ಷರಾದ ಯೋಗೇಶ್ ಗೌಡ ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು. - - - 2ಪಿವಿಡಿ2 ಅಮ್ ಆದ್ಮಿ ಪಕ್ಷ ಸಂಘಟನೆ ಕುರಿತು ಸಭೆ ನಡೆಸಿದ್ದು ಜಿಲ್ಲಾ ಹಾಗೂ ತಾಲೂಕು ಮುಖಂಡರು ಭಾಗವಹಿಸಿದ್ದರು. 2ಪಿವಿಡಿ3 ಪಾವಗಡ ಅಮ್ ಆದ್ಮಿ ಪಕ್ಷದ ತಾಲೂಕು ಅಧ್ಯಕ್ಷರಾಗಿ ಕಡಮಲಕುಂಟೆ ಗೋಪಾಲ್ ಆಯ್ಕೆ,ಎಎಪಿ ಮುಖಂಡ ಮತ್ತು ಕಾರ್ಯಕರ್ತರಿಂದ ಸನ್ಮಾನ