ದೇಶಕ್ಕೆ ಅಂಬೇಡ್ಕರ್ ಕೊಡುಗೆ ಅಪಾರ: ಅಶೋಕ ಕರಣಗಿ

| Published : Apr 15 2024, 01:19 AM IST

ಸಾರಾಂಶ

ಸಂವಿಧಾನ ಅತ್ಯಂತ ಪವಿತ್ರ ಗ್ರಂಥ. ಪ್ರತಿಯೊಬ್ಬರು ಅದನ್ನು ಗೌರವಿಸಬೇಕು. ಯುವಕರು ಅವರಂತೆ ಪುಸ್ತಕ ಪ್ರೇಮಿಗಳಾಗಬೇಕು.

ಕನ್ನಡಪ್ರಭ ವಾರ್ತೆ ಯಾದಗಿರಿ

ಡಾ. ಬಿ .ಆರ್. ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ಕೊಟ್ಟ ಕೊಡುಗೆ ಅಪಾರವಾದದ್ದು ಎಂದು ವಡಗೇರಾ ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಶೋಕ ಸಾಹುಕಾರ ಕರಣಗಿ ಹೇಳಿದರು.

ವಡಗೇರಾ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ 133ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಸಂವಿಧಾನ ಅತ್ಯಂತ ಪವಿತ್ರ ಗ್ರಂಥ. ಪ್ರತಿಯೊಬ್ಬರು ಅದನ್ನು ಗೌರವಿಸಬೇಕು. ಯುವಕರು ಅವರಂತೆ ಪುಸ್ತಕ ಪ್ರೇಮಿಗಳಾಗಬೇಕು ಎಂದು ಹೇಳಿದರು.

ಹಿರಿಯ ಮುಖಂಡ ಬಾಶುಮಿಯಾ ನಾಯ್ಕೋಡಿ ಮಾತನಾಡಿ, ಅಂಬೇಡ್ಕರ್ ಅವರು ಹಿಂದುಳಿದ ವರ್ಗದ ಆಶಾಕಿರಣ. ಅತ್ಯಂತ ಪವಿತ್ರವಾದ ಸಂವಿಧಾನವನ್ನು ರಚಿಸಿ ಹಿಂದುಳಿದ ವರ್ಗದವರನ್ನು ಮುನ್ನೆಲೆಗೆ ಬರುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ತತ್ವಾದರ್ಶ ಹಾಗೂ ಸಿದ್ಧಾಂತಗಳನ್ನು ಇಂದಿನ ಯುವ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪ್ರತಿಯೊಬ್ಬರು ಅವರಂತೆ ಹೋರಾಟದ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.

ದಲಿತ ಸಂಘರ್ಷ ಸಮಿತಿಯ ತಾಲೂಕಾಧ್ಯಕ್ಷ ಗುರು ನಾಟೇಕಾರ, ಶರಣು ಇಟಗಿ, ಉಸ್ಮಾನ್ ಭಾಷಾ ತಡಿಬಿಡಿ, ಅಬ್ದುಲ್ ಚಿಗನೂರ, ಮಲ್ಲಣ್ಣ ನೀಲಳ್ಳಿ, ಸಿದ್ದಪ್ಪ ತಮ್ಮಣ್ಣೂರ, ಅಬ್ದುಲ್ ಕತಾಲಿ, ಶರಣು ಕುರ್ಕಳ್ಳಿ, ಬಸನಗೌಡ ಜಡಿ, ಭೀಮಣ್ಣ ಬೂದಿನಾಳ, ಶರಣು ಕುರಿ, ಫಕೀರ ಅಹ್ಮದ್ ಮರಡಿ, ಶರಣು ಜಡಿ, ಬಸವರಾಜ ದೇವದುರ್ಗ, ಅಜ್ಮೀರ್ ಭಾಷಾ ನೂರಭಾವಿ, ಮರಿಲಿಂಗ ಗೋನಾಲ, ಸಂತೋಷ್, ದೇವು ಹಾಲಗೇರಾ, ಪ್ರಭು, ಕಲ್ಲಪ್ಪ, ದೇವು ಜಡಿ, ಹಣಮಂತ, ರಾಯಪ್ಪ, ಮೌನೇಶ ಇತರರಿದ್ದರು.