ಬಂಗಾಳದಲ್ಲಿ ದಿಡೀರ್ ಬಿರುಗಾಳಿ ನಾಲ್ವರ ಸಾವು : ನೂರಾರು ಮಂದಿಗೆ ಗಾಯ

| Published : Apr 01 2024, 12:45 AM IST / Updated: Apr 01 2024, 08:28 AM IST

ಸಾರಾಂಶ

ಇದಕ್ಕಿದ್ದಂತೆ ಶುರುವಾದ ದಿಢೀರ್‌ ಮಳೆ ಹಾಗೂ ಬಿರುಗಾಳಿಯಿಂದಾಗಿ ನಾಲ್ವರು ಸಾವನ್ನಪ್ಪಿ 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ ಘಟನೆ ಭಾನುವಾರ ಪಶ್ಚಿಮ ಬಂಗಾಳದ ಜಲ್‌ಪೈಗುರಿಯಲ್ಲಿ ಸಂಭವಿಸಿದೆ.

ಜಲಪೈಗುರಿ: ಇದಕ್ಕಿದ್ದಂತೆ ಶುರುವಾದ ದಿಢೀರ್‌ ಮಳೆ ಹಾಗೂ ಬಿರುಗಾಳಿಯಿಂದಾಗಿ ನಾಲ್ವರು ಸಾವನ್ನಪ್ಪಿ 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ ಘಟನೆ ಭಾನುವಾರ ಪಶ್ಚಿಮ ಬಂಗಾಳದ ಜಲ್‌ಪೈಗುರಿಯಲ್ಲಿ ಸಂಭವಿಸಿದೆ. 

ಇದರಿಂದಾಗಿ ಜಿಲ್ಲೆಯಾದ್ಯಂತ ಭಾರಿ ಪ್ರಮಾಣದ ಆಹಾರ ಬೆಳೆ ನಷ್ಟವಾಗಿದ್ದು, ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ಘಟನೆ ಸಂಬಂಧ ರಾಜ್ಯಪಾಲ ಸಿ.ವಿ. ಆನಂದಬೋಸ್‌ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜಿಲ್ಲೆಗೆ ಆಗಮಿಸಿ ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ವಿಪತ್ತು ನಿರ್ವಹಣಾ ದಳ ನಿಯೋಜನೆ ಮಾಡಲಾಗಿದೆ.